Sunday, November 11, 2012

ಹಳೆಯದೊಂದು ಕವನ

ಚಿತ್ರ ಕೃಪೆ : ಅಂತರ್ಜಾಲ 



ನಿರಂತರ!

ಎತ್ತರದ ಗೋಡೆಗಳ ಕೋಟೆ
ಅಂಗಳದಲಿ ಬಾಡಿದ ಹೂವಿನ ಮೋರೆ
ಗೊಡವೆ ಇಲ್ಲದೆ ನೆಲ್ಲಕ್ಕೆ ಚಿದಿರಿದ ದೇಹ
ಕಳಚಿದಂತಿದೆ ಯವ್ವನದ ಪೊರೆ
ಚೆಲುವಿಗೆ ಹಿಂದೊಮ್ಮೆ ಇವಳೇ ಅರಸಿ!

ಹೊರ, ಹಸಿರು ಬಳ್ಳಿಯ
ಒಣಪು ಬಿನ್ನಾಣದ ಸುಂದರ ವನ
ಹೆಮ್ಮರಗಳ ಆಸರೆಯ
ತೋಳ ತೆಕ್ಕೆಗೆ
ತೇವ ನೆಲದ ಆರೈಕೆಗೆ                                                                                                                                                                                        ಅರಳಿದ ನೂರಾರು ಹೂ ಮನ 
ಅಂದೆಲ್ಲೋ ದಟ್ಟ ಕಾಡಿನ ಗರ್ಭದೊಳು
ಸುಗಂಧ ಬರಿತ ಹೂವಾಗಿ ನಿಂತು
ಸೆಳೆದಿದ್ದು ಬರಿಯ ವಿಷ ಮನವನೆ
ಮುಳ್ಳಿನ ನಡುವೆಯೇ ನಗುವ
ಕೇದಿಗೆಯ ಬಾಳು

ಪ್ರೀತಿಗಾಗಿ ಬಂದವರೆಲ್ಲ
ದೇವತೆ ಎಂದು ಬಣ್ಣಿಸಿದರಲ್ಲಾ
ಕೊನೆಗೂ ಸ್ಥಾಪಿಸಿದ್ದು
ಮನದಲ್ಲಲ್ಲ ಮನೆಯಲ್ಲಲ್ಲ
ಗುಡಿಯಲ್ಲೇ!
ದರ್ಶನಕ್ಕಾಗಿ
ನಿತ್ಯದ ಕರ್ಮಕ್ಕಾಗಿ

ಪರದೆ ಎಳೆಯುವ ಮುನ್ನವೇ
ಮುಗಿದ ಕಥೆಯ
ಪಾತ್ರಧಾರಿಗಳೆಲ್ಲ ಬರಿಯ
ಉಸಿರಾಡೋ ಶವ

ಏನಾದರು ನಟಿಸಲೇ ಬೇಕು
ನಟಿಸಿ ಮೆಚ್ಚಿಸಲೇಬೇಕು
ಏಷ್ಟಾದರೂ ಕಥೆಯಿಲ್ಲದ ನಾಟಕಕ್ಕೂ
ಸೂತ್ರಧಾರಿಯು ಅವನೇ ತಾನೇ (ನಗು)

ಬಿಸಿಲಲ್ಲೋ ಮಳೆಯಲ್ಲೋ
ತನ್ ಹೆಸರ ನೆರಳಲ್ಲೋ
ನರಳಿಸಿ ಬೇಯಿಸಿ ಅವಮಾನಿಸಿ
ಹೇಗೋ ಬದುಕಿಸಿ ಬಿಟ್ಟ
ವ್ರಧ್ಯಪ್ಯದ ಅಂಚಿನಲಿ
ಕೋಟೆ ಬೇಲಿಯ ಬಾಳಿಗೆ ಬಿಡುಗಡೆಯನಿಟ್ಟ

ಅವಳು ಹೊರ ನಡೆದಂತೆ
ಕಂಡಿದ್ದು ಅವಳದೇ ಹಳೆ ಪ್ರತಿಬಿಂಬ
ಒಳ ಹೊಕ್ಕಿದ ದೃಶ್ಯ
ಕೂಗಲು ದ್ವನಿ ಇಲ್ಲ
ಹಿಡಿದು ನಿಲ್ಲಿಸಲು ಬಲವಿಲ್ಲ
ಗೋಡೆಗಳ ಮಧ್ಯೆ
ಮತ್ತದೆ ಕಥೆಯಿಲ್ಲದ ನಾಟಕಕ್ಕೆ
ರಂಗ ಸಜ್ಜು

ಇಷ್ಟಾದರೂ
ಸೂತ್ರಧಾರಿಯು ಅವನೇ ತಾನೇ (ಅಕ್ರೋಶ)

7 comments:

  1. ಚಿನ್ಮಯ ಮೆಚ್ಚುಗೆಗೆ ಧನ್ಯವಾದಗಳು..ಸಲಹೆಗಳ ನೀಡುತ್ತಿರಿ ... :-)

    ReplyDelete
  2. ಉದ್ದಕ್ಕೆ ಬೆಳೆದ ಕಬ್ಬು ದೇಹವನ್ನೆಲ್ಲ ಸಿಹಿಯನಾಗಿ ಇಟ್ಟುಕೊಂಡಿದ್ದರು..ಪ್ರತಿ ಗೆಣ್ಣಿನಲ್ಲೂ ಗಂಟುಗಳನ್ನು ಹೊಂದಿರುತ್ತೆ..ಅದು ಸಿಹಿಯು ಅಲ್ಲ ಕಹಿಯು ಅಲ್ಲ..ಸಿಹಿ ಬೇಕು ಅಂದ್ರೆ ಆ ಗಂಟನ್ನು ದಾಟಬೇಕು...ಹೀಗೆ ನಿಮ್ಮ ಕವನದ ಪ್ರತಿಯೊಂದು ಹಂತವು ಸಿಹಿಯನ್ನು ಉಣಬಡಿಸುತ್ತಲೇ ಮುಂದಿನ ಗಂಟಿಗೆ ಸುಳುಹು ನೀಡುತ್ತದೆ..ಸುಂದವರವಾಗಿ ಹೆಣೆದ ಸಾಲುಗಳು

    ReplyDelete
  3. ನೀ ಬರೆದ ಕವನಗಳಲ್ಲೇ "ಬಹುಚರ್ಚಿತವಾದ" ಕವನ, ಯಾರೊಬ್ಬರಿಗೂ ಅರ್ಥವಾಗದ ಕವನ [2 Dimension ] :d

    ದೇವದಾಸಿಯೊಬ್ಬಳ ಆಕ್ರಂದನದ ಸಾಲುಗಳನ್ನ ನೀ ಬರೆದ ರೀತಿ ನಿಜಕ್ಕೂ ನನ್ನನ್ನ ಮೂಕವಿಸ್ಮೀತನನ್ನಾಗಿಸಿತ್ತು ..!!

    ಈ ಕವನದಲ್ಲಿ ನೀ ಬಳಸಿದ ಒಂದೊಂದು ಉಪಮೆಯೂ ಕೂಡಾ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು.

    ಯದ್ವಾ-ತದ್ವಾ ಇಷ್ಟವಾಗುವ, ಮನಕುಲುಕುವ, ವ್ಯವಸ್ಥೆಯ ಮೇಲೆ ಆಕ್ರೋಶ ತರಿಸುವ ಕವನ..

    ಹಾ,...... ಇನ್ನೊಂದ್ ವಿಷಯ, ವೈಶೂ ಇಂಥಹ ಕವನಗಳನ್ನ ನೀನ್ ಮಾತ್ರ ಬರೀಬಲ್ಲೆ. :-)

    ReplyDelete
  4. ee kavana nanu illa andru 6 sala odiddini....!! thumba chennagide... Sheshuma!! :)

    ReplyDelete
  5. totally agreed with Raghu Bro.....'ಇಂತಹ ಕವನಗಳನ್ನು ನೀನು ಮಾತ್ರ ಬರೆಯಬಲ್ಲೆ'.... ನಿನ್ನ ಬರವಣಿಗೆಯ ಬಗ್ಗೆ ನಾನು ಹೆಮ್ಮೆ ಪಟ್ಟ ಕವನ ಇದು....ಎಲ್ಲರಿಗೂ ಸುಲಭವಾಗಿ ಅರ್ಥಮಾಡಿಕೊಳ್ಳಲಾಗದೇ ಇದ್ದರೂ ಅರ್ಥಮಾಡಿಕೊಂಡವರು ನಿನ್ನ ಪ್ರತಿಭೆಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟು ಕೊಳ್ಳು ವಂತಹ ಬರಹ ....ಉಪಮಾಲಂಕಾರದ ಸಮರ್ಪಕ ಬಳಕೆಯನ್ನು ಕಂಡ ಸುಂದರ ಕವನ.....ಇಂತಹ ಕವನಗಳು ಹೆಚ್ಚು ಹೆಚ್ಚು ಮೂಡಿಬರಲಿ....

    ಅಭಿನಂದನೆಗಳು ಸಹೋದರಿ.....

    ReplyDelete
  6. ನನಗಿದನ್ನ ಅರ್ಥ ಮಾಡಿಸೋಕೆ ಸಾಕ್ಷಾತ್ ನೀನೆ ಬರಬೇಕಾಯ್ತು ನೋಡು.. ಒಂದೊಂದು ಪ್ಯಾರವನ್ನ ಕೂಡ ಅವತ್ತು ನೀನು ಅರ್ಥ ಮಾಡಿಸದೆ ಹೋಗಿದ್ದಿದ್ರೆ.. ಈ ಕವನ ಈವತ್ತಿಗೂ ಬಿಡಿಸಲಾಗದ ಕಗ್ಗಂಟೆ.. ಅರ್ಥವಾಗದೆ ನಿಘಂಟೇ.. ಇದು ನಿನ್ನ ಹೀಗಿಬ್ಬರು ಕಲಂಕಿನಿಯರುವಿನ ಮುಂದುವರೆದ ಭಾಗ ಅನ್ನಿಸೋದು ಕವನದ ಹಿರಿಮೆ ಅಶೋಕಣ್ಣ ಹೇಳಿದ ಹಾಗೆ ಇಂತಹದ್ದನ್ನ ಬರೆಯೋದ್ರಿಂದಲೇ ನಿನ್ನ ಮೇಲೆ ಅಭಿಮಾನದ ಜೊತೆಗೆ ಆಸಕ್ತಿಯೂ ನಮ್ಮಲ್ಲಿ ಜಾಸ್ತಿ ಆಗೋದು.. ನಂ ಹತ್ರ ಮೊದ ಮೊದಲು ಮಾತಾಡಿದ ಜೆರ್ರಿ ನೀನೇನಾ ಅಂತ ಅನುಮಾನ ಮೂಡ್ಸೋದು.. ಅಶೋಕಣ್ಣ ಹೇಳಿದ ಹಾಗೆ ಹೊಟ್ಟೆ ಕಿಚ್ಚು ಪಟ್ಟವರಲ್ಲಿ ನಾನೂ ಒಬ್ಬ ಸ್ವಲ್ಪ ಖುಷಿ ಪಡು.


    ಕವನ ಬಹಳ ಚೆನ್ನಾಗಿದೆ ಅಂತ ಸ್ಟಿಕ್ಕರ್ ಅಂಟಿಸಬೇಕಾದ ಅವಶ್ಯಕತೆ ಇಲ್ಲ ಅಂದು ಕೊಳ್ತೀನಿ.. ಯಾಕಂದ್ರೆ ಅದು ಸಾರ್ವಕಾಲಿಕ ಸತ್ಯ.

    ReplyDelete